Pages

Total Visitors

Wednesday, December 15, 2010

ಉಭಯ ಕುಶಲೋಪರಿ



ನಾನೆಲ್ಲಿಂದ ಬಂದೆ ಎಂದು 
ಕಳಚಿಕೊಂಡ ತೊಟ್ಟ ಕೇಳಬೇಕು 
ಒಂದಿಷ್ಟು ಹೊತ್ತು ನಿನ್ನ ಸಂಗಡ
ಇರಬೇಕೆಂದು ಬಯಸಿ ಬಂದದ್ದಲ್ಲ 
ಯಾರೋ ತೇಲಿಬಿಟ್ಟರು ..


ಈ ಬಂಧ ಬಹಳ ಹೊತ್ತಿನದಲ್ಲ ಗೆಳತೀ.. 
ಇನ್ನೊಂದು ತೆಳು ಗಾಳಿಯೂ ಬೇರ್ಪಡಿಸೀತು ..
ಚಿಂತೆ ಬಿಡು .. ಮಣ್ಣ ನಂಟೇನು ಹೊಸತೆ ..
ಅಲ್ಲೇ ಹುಟ್ಟಿದ್ದು .. ಮರಳುವಾಗ ಮಾತ್ರ ನೋವೇಕೆ 
ಬಣ್ಣ ಕಳೆದುಕೊಂಡರೂ ಬದುಕು 
ಹೊಸ ಸಸಿಗೆ ಗೊಬ್ಬರವಾಗುವ ಬಯಕೆ ..

No comments:

Post a Comment