Pages

Total Visitors

Friday, October 21, 2011

ಬಂದು ನೋಡಾ.. ನಮ್ಮೂರ ರೋಡಾ..

ನೀವು ಧೈರ್ಯವಂತರಾಗಿದ್ದರೆ ಈ ಆಹ್ವಾನವನ್ನು ಸ್ವೀಕರಿಸುತ್ತೀರಿ ಎಂಬ ನಂಬಿಕೆ ನನ್ನದು..ಅರೆ..!! ಹೊರಟೇ ಬಿಟ್ರಾ.. ಸರಿ.. ಬನ್ನಿ ಬನ್ನಿ ....


ಸಧ್ಯಕ್ಕೆ ನಾವು ವಿಮಾನ ಹೆಲಿಕಾಪ್ಟರ್ ಗಳಲ್ಲಿ   ಹಾರುವಷ್ಟು ಅನುಕೂಲ ಹೊಂದಿಲ್ಲದ ಕಾರಣ ಎಲ್ಲರೂ ರಸ್ತೆಯ  ಮೂಲಕವೇ ಬರಬೇಕೆನ್ನುವುದು ಸತ್ಯವಷ್ಟೆ. ಹಾಗಾಗಿ ನಮ್ಮೂರಿನ ರಸ್ತೆಯಲ್ಲಿ ಸಂಚರಿಸುವಾಗ 
ಪಾಲಿಸಲೇಬೇಕಾದ ಕೆಲವು ಕಿವಿಮಾತುಗಳನ್ನು ನಿಮಗೆ ಹೇಳಲು ಇಷ್ಟ ಪಡುತ್ತೇನೆ.


ನಿಮ್ಮ ಸೀಟ್ ಬೆಲ್ಟ್ ಗಳನ್ನು ಅಗತ್ಯವಾಗಿ ಕಟ್ಟಿಕೊಳ್ಳಿ.

ಒಂದೆರಡು ಜೊತೆ ಬಟ್ಟೆಗಳನ್ನು , ತುಂಬಿರುವ ನೀರಿನ ಬಾಟಲ್ ಗಳನ್ನು ಇರಿಸಿಕೊಳ್ಳಿ. 



ಎಲ್ಲಾ ವಾಹನದವರು ಹೆಲ್ಮೆಟ್ ಜೊತೆಗಿರಿಸಿಕೊಳ್ಳುವುದು ಉತ್ತಮ.

ಇದಿಷ್ಟು ಪೂರ್ವ ಸಿದ್ಧತೆಗಳಾಗಿದ್ದರೆ, ರಾಷ್ಟ್ರೀಯ ಹೆದ್ದಾರಿ ಬಿಟ್ಟು  ಒಳ ತಿರುಗಿ ಕೆಲವು ಹೊಂಡ ಗುಂಡಿಗಳನ್ನು ಲೀಲಾಜಾಲವಾಗಿ ದಾಟಿ ಬನ್ನಿ. ಕೊಂಚ ಮುಂದೆ ಬರುವಾಗ ಒಂದು ಸ್ವಾಗತ ಕಮಾನು ನಿಮ್ಮನ್ನು ಹೊಸ ಲೋಕದೆಡೆಗೆ ಕರೆದೊಯ್ಯುತ್ತದೆ .

ಮುಂದಿನ ಮಾರ್ಗದೆಡೆಗೆ ಕಣ್ಣು ಹಾಯಿಸಿದಾಗಲೇ ಡರ್ ಕೆ ಆಗೆ ಜೀತ್ ಹೆ.. ಎಂಬ ಜಾಹೀರಾತು ನೆನಪಿಗೆ  ಬರುತ್ತಿದೆಯೇ  ..?

ದೊಡ್ಡ ದೊಡ್ಡ ಗುಂಡಿಗಳ ಮಧ್ಯೆ ಸಣ್ಣ ಪೆನ್ಸಿಲ್ ರೇಖೆಯೆಳೆದಂತೆ ಕಪ್ಪಗಿನ ಬಣ್ಣದ ಎಂದೋ ಒಂದು ಸಲ ಇಲ್ಲಿಗೆ ಟಾರ್ ಹಾಕಿದ್ದರು ಎಂಬ ಗುರುತು ಕಾಣಿಸಿತೇ? ಹಾಗಿದ್ದರೆ ನೀವೀಗ ನಮ್ಮ ಮಾರ್ಗವನ್ನು  ಪ್ರವೇಶಿಸಿದ್ದೀರಿ. ಅತಿ ಸಾಹಸದಿಂದ ವಾಹನದ ಒಳಗೇ ಇರಲು ಪ್ರಯತ್ನಿಸಿ . 
ನಿಮ್ಮ ವಾಹನದಿಂದ ಒಂದಿಬ್ಬರನ್ನು ಕೆಳಗೆ ಇಳಿಸಿ,ನಡೆದುಕೊಂಡು ಬರಲು ತಿಳಿಸಿ. ನೀವು ವಾಹನದ ಮೂಲಕ ಗಮ್ಯವನ್ನು ತಲುಪುವ ಹೊತ್ತಿನಲ್ಲಿ ಅವರು ನಡೆದೂ ತಲುಪುತ್ತಾರೆ.. !!

ಅಚ್ಚರಿಯಾಯಿತೇ.!! . ನಿಮ್ಮ ಉತ್ತರ ಹೌದೆಂದಾಗಿದ್ದರೆ  ನೀವೂ ಈ ರಸ್ತೆಯನ್ನು ಪ್ರೀತಿಸತೊಡಗಿದ್ದೀರಿ ಎಂದರ್ಥ.

ಈಗ ನಮ್ಮೂರಿನ ರಸ್ತೆಯನ್ನು ಪ್ರಖ್ಯಾತ ಪ್ರವಾಸಿ ತಾಣವಾಗಿಸುವತ್ತ ಗಮನ ಹರಿಸೋಣ.

ಶಾಲಾ ಮಕ್ಕಳನ್ನು ಕರೆತಂದು ಇಲ್ಲಿನ ಹೊಂಡಗಳಲ್ಲಿ ಗಿಡ ನೆಡುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಬಹುದು.

ದಕ್ಷಿಣ ಕನ್ನಡದ ಪ್ರಸಿದ್ಧ ಜಾನಪದ ಕ್ರೀಡೆಯಾದ ಕಂಬಳವನ್ನು ಇಲ್ಲಿ ಸುಲಭವಾಗಿ ನಡೆಸಬಹುದು.

ಮಹೀಂದ್ರ ಕಂಪೆನಿಯವರ ಗ್ರೇಟ್ ಎಸ್ಕೇಪ್ ಮಹೀಂದ್ರ ರಾಲಿಯನ್ನು ನಡೆಸಲು ಅವರನ್ನು ಇಲ್ಲಿಗೆ 
ಆಹ್ವಾನಿಸಬಹುದು. ಅವರಿಲ್ಲಿಂದ ಎಸ್ಕೇಪ್ ಆಗಿ ಹೋದರೆ ಅದೇ ದೊಡ್ಡ ರಾಷ್ಟ್ರೀಯ ಸುದ್ದಿಯಾಗಲೂ ಬಹುದು .ಮಳೆಗಾಲದಲ್ಲಿ ಇದು ಸಹಜ ಇಂಗು ಗುಂಡಿಗಳಾಗಿ  ವರ್ತಿಸಿ ಭೂಮಿಯ  ನೀರಿನ ಮಟ್ಟ ಏರಿಸುವುದನ್ನು ನೀವು ಕಾಣಬಹುದು 

ಆಸಕ್ತ ರೈತರಿಗೆ ಇದರಲ್ಲಿ ಮೀನಿನ ಸಾಕಾಣಿಕೆಯನ್ನು ಕೆರೆ ಕಟ್ಟಿಸುವ ಖರ್ಚಿಲ್ಲದೆ ಮಾಡಬಹುದು. 

ಡಾಕ್ಟರ್ ಗಳಿಗೆ ಮತ್ತು ವಾಹನ  ರಿಪೇರಿ ಮಾಡುವವರಿಗೆ ಹೆಚ್ಚಿನ ಆಧಾಯ ನೀಡುವ ಕಾರಣ ಅವರ ಮೇಲೆ ಒಂದಿಷ್ಟು ಹೆಚ್ಚಿನ ಟಾಕ್ಸ್ ಹಾಕಿ ಹಣ ವಸೂಲಿ ಮಾಡುವ ಬಗ್ಗೆ ಸರಕಾರ ಚಿಂತನೆಯನ್ನು ನಡೆಸಬಹುದು 
ಇಂತಹ ರಸ್ತೆಯ ನಿತ್ಯ ಸಂಚಾರಿಗಳಾದ ನಮ್ಮನ್ನು ಅಂದರೆ, ಇನ್ನು ನೆಟ್ಟಗೆ ನಡೆದಾಡಲು ಸೊಂಟ ಕೈಕಾಲು ಸಹಕರಿಸುತ್ತಿರುವವರನ್ನು ಉತ್ತಮ ಆರೋಗ್ಯ ಹೊಂದಿದ ವ್ಯಕ್ತಿ ಎಂದು ಸನ್ಮಾನ ನೀಡಬಹುದು.



ಕೊನೆಯ ಮಾತು: ನಿಮ್ಮ ವಾಹನವನ್ನು ಸುಲಭವಾಗಿ  ಈ ಮಾರ್ಗವಾಗಿ ಚಲಾಯಿಸಬೇಕೆಂದಿದ್ದರೆ  ಈ ಚಿತ್ರದಲ್ಲಿದೆ  ಸುಲಭ ಉಪಾಯ ..



ಇಂತಹ ಅದ್ಭುತಗಳಿಗೆ ಅನುವು ಮಾಡಿಕೊಟ್ಟ ನಮ್ಮೂರ ರಸ್ತೆಗೆ ಈಗ ಎಲ್ಲರೂ ಜೈ 
ಅನ್ನೋಣವೇ..!! 

5 comments:

  1. ele rashthe.. enidu avasthe.. :-)

    ReplyDelete
  2. Nice write up!Filled with stylish punches right on the nose of Karnataka government! Sometimes sarcasm is the best method of communication and you have proved it again! I never forget to mention that your style of writing is impeccable, inimitable and simply superb ! Keep it up Anitha :):):)

    ReplyDelete
  3. ee road ishtaadaru ide, malegaaladalli namooru road nodidre, road yavdu? gadde yavdu anta gottaguttirlilla. aa prakaara idu better.
    nice narration. ishtavaayitu.:)

    ReplyDelete
  4. idannu baredu mugisuvashtaralli pemcil na maark galante kaanuttidda rasteya avasheshagalu maayavaagide..
    daari kaanadaagide raaghavendrane anta haadbekaste eega :)

    ReplyDelete