Pages

Total Visitors

Thursday, November 28, 2013

ವೃಕ್ಷ ಮಾತೆ




ಹಸಿರೊಡಲಿನ ಬಸಿರೇ 
ಇಳೆಯ ದೇಹದುಸಿರೇ 
ನೆಲದೊಲುಮೆಯ ಚೇತನವೇ
ಅರಳಿ ನಿಂತ ಸುಮವೇ

ತಂಗಾಳಿಯ ಜೋಕಾಲಿಯ 
ಹಾರಾಡುವ ಬಾನಾಡಿಯ
ಕ್ಷಣ ತಡೆದು ನಿಲ್ಲಿಸಿ
ನೆರಳ ಕೊಟ್ಟು ಲಾಲಿಸಿ

ಭೂರಮೆಯ ವಿಸ್ಮಯವೋ
ನೆಲ ಜಲದ ಪ್ರಣಯವೋ
ಕೊಂಬೆ ಕೊಂಬೆಯಲ್ಲು ಕೆಂಪು
ಪಸರಿಸಿದ ಹೂವ ಕಂಪು

ಪ್ರಕೃತಿಯ ಗಡಿಯಾರವ
ತಿರುಗಿಸುವವರ್ಯಾರವ್ವ
ಪರ್ವ ಮಾಸ ವರ್ಷಕಾಲ
ನಿಲ್ಲದೆ ನಡೆವುದೀ ಜಾಲ

ಹೊತ್ತ ತನ್ನದೆಲ್ಲವ
ಪರರಿಗಿತ್ತು ಸಲಹುವ
ತಾಯೇ ನಿನ್ನ  ಮಮತೆಗೆ
ಕೊಡಲೇನಿದೆ  ಬದಲಿಗೆ ..

5 comments:

  1. ಒಳ್ಳೆಯ ಬರಹಗಾರ್ತಿಯ ಮೂಸೆಯಿಂದ ಆಪ್ತ ಶೈಲಿಯ ಭಾವಗೀತೆ.

    ReplyDelete
  2. ಆಹಾ..!! ಹಸಿರ ಸಿರಿ ತುಂಬಿ ತುಳುಕುತ್ತಿದೆ ನಿಮ್ಮ ಸಾಲುಗಳಲ್ಲಿ.. ಚೆಂದದ ಕವನ ಅದಕ್ಕೆ ತಕ್ಕ ಪೋಟೋ

    ReplyDelete
  3. ಚೆನ್ನಾಗಿದೆ ಕವನ...ರಾಗ ಕೊಟ್ಟರೆ ಹಾಡುವಂಥದ್ದು

    ReplyDelete
  4. ಸಾಲಿನಲ್ಲೂ ವನಮಾತೆಯ ಮಮತೆಯೇ ತ್ಯಾಗವೇ... ಬದಲಿಗೆ ತಿರುಗಿಸಿ ಕೊಡೋಕೆ ನಮ್ಮಲ್ಲೇನು ಹೆಚ್ಚಾಗಿ ಇಲ್ಲದಿರುವುದು ವಿಪರ್ಯಾಸ....
    ಸೂಪರ್ ಅನಿ :)

    ReplyDelete